Thursday, November 24, 2016

ಆದಿ

ನೀ ದೂರವಿದ್ದರೂ ಕನಸಲಿ ಸನಿಹ,
ನೀ ಕಾಡದಿದ್ದರೂ ಮನಸಲಿ ಕಲಹ,
ನನ್ನ ಈ ಸ್ತಿಥಿಗೆ ಕಾರಣವೆ ವಿರಹ,
ಆದಕ್ಕೆ ಶುರು ಮಾಡಿದೆ ಕವಿತೆಯಾ ಬರಹ....
                             -ಲೋಶ್ಲೋ

Wednesday, November 23, 2016

ಕಣ್ಣಲೇನಿಟ್ಟಿಹನಾಬ್ರಹ್ಮ ದಿಟ್ಟಿಸಿ
ನೋಡುತಿರುವೆ ನಾ ನಿನ್ನ..
ಕಂಗೆಟ್ಟು ಕನವರಿಸಿ ನಿನ್ನ ಹೆಸರು,
ಏರು- ಪೇರಾಗಿದೆ ನನ್ನುಸಿರು.
             -ಬುಕ್ಕಾಪಟ್ಟಣ ಮೋಹನ್

ಆತ್ಮಹತ್ಯೆ...?!!

ಆತ್ಮಹತ್ಯೆ..?
ಸತ್ತವರ ಮನೆಯಲ್ಲಿ ಕೆಡಲೇನಿದೆ,
ಅಳುದುಳಿದ ಹಾಲು ಮೊಸರು;
ಸಾವಿಗೆ ಶರಣಾಗುವ ಮುನ್ನ
ಕುಳಿತು ನೀ ಯೋಚಿಸು ಒಂದು ಕ್ಷಣ;
ಬೆಳಕು ಇರುವುದು ತುಸು ಹತ್ತಿರದಲ್ಲೆ,
ಕತ್ತಲಿಗೆ ಹೆದರಿ ಕಣ್ಮುಚ್ಚಿದರೆ
ಬೆಳಕೆಲ್ಲಿಂದ ಬಂದೀತು?
ನಿನ್ನ ನಂಬಿದವರ ಬಾಳೆಲ್ಲ ಹುಳುಕು.
ಇದ್ದು ಸಾಧಿಸು ಎನಾದರೊಂದು..
ದೇವನಿರುವ ಜೊತೆಗೆ ಎಂದೆಂದೂ..
-ಬುಕ್ಕಾಪಟ್ಟಣ ಮೋಹನ್