ಯಾಕೀ ಕಡೆಗಣಿಸುವ ಮೌನ...
ಮಾತನಾಡುವುದಕ್ಕೆ ಇಷ್ಟವಿಲ್ಲದಿದ್ದರೆ ಹೇಳಿ ಬಿಡು ಇನ್ನ...
ನೋಡಿಯೂ ನೊಡದ○ತೆ ಹೋಗುವೆ ಮು○ದೆ...
ಮರೆತು ಎಲ್ಲ ಸ್ನೇಹವ ಹಿ○ದೆ...
-ಲೋಶ್ಲೋ
Friday, December 23, 2016
ಮೌನ...
Thursday, November 24, 2016
ಆದಿ
ನೀ ದೂರವಿದ್ದರೂ ಕನಸಲಿ ಸನಿಹ,
ನೀ ಕಾಡದಿದ್ದರೂ ಮನಸಲಿ ಕಲಹ,
ನನ್ನ ಈ ಸ್ತಿಥಿಗೆ ಕಾರಣವೆ ವಿರಹ,
ಆದಕ್ಕೆ ಶುರು ಮಾಡಿದೆ ಕವಿತೆಯಾ ಬರಹ....
-ಲೋಶ್ಲೋ
Wednesday, November 23, 2016
ಆತ್ಮಹತ್ಯೆ...?!!
ಆತ್ಮಹತ್ಯೆ..?
ಸತ್ತವರ ಮನೆಯಲ್ಲಿ ಕೆಡಲೇನಿದೆ,
ಅಳುದುಳಿದ ಹಾಲು ಮೊಸರು;
ಸಾವಿಗೆ ಶರಣಾಗುವ ಮುನ್ನ
ಕುಳಿತು ನೀ ಯೋಚಿಸು ಒಂದು ಕ್ಷಣ;
ಬೆಳಕು ಇರುವುದು ತುಸು ಹತ್ತಿರದಲ್ಲೆ,
ಕತ್ತಲಿಗೆ ಹೆದರಿ ಕಣ್ಮುಚ್ಚಿದರೆ
ಬೆಳಕೆಲ್ಲಿಂದ ಬಂದೀತು?
ನಿನ್ನ ನಂಬಿದವರ ಬಾಳೆಲ್ಲ ಹುಳುಕು.
ಇದ್ದು ಸಾಧಿಸು ಎನಾದರೊಂದು..
ದೇವನಿರುವ ಜೊತೆಗೆ ಎಂದೆಂದೂ..
-ಬುಕ್ಕಾಪಟ್ಟಣ ಮೋಹನ್
Wednesday, September 7, 2016
ಯಶಸ್ಸು..!!?
ಇರುಳಷ್ಟೇ ಇರದು
ಹಗಲೂ ಬಾರದಿರದು,
ಹಗಲುಗನಸಲ್ಲೇ ದಿನ ಕಳೆದು;
ರಾತ್ರಿಯಲ್ಲ ನಿದಿರೆಯ
ಮದಿರೆಯ ಆರಾಧನೆ,
ಏನು ಮಾಡಲಾಗಲಿಲ್ಲ
ಎಂಬ ಚಿಂತೆ ಪ್ರತಿದಿನ;
ಬರಿ ಕನಸ ಕನವರಿಕೆಯಲ್ಲೇ
ಮುಗಿಯಿತೆ ಜೀವನ,
ನಾ ಅಡಿಯಿಡದೆ
ಮುಂದೆ, ಅಡಿಗಡಿಗೆ
ಅಳುತಿದ್ದರೇನು ಚೆಂದ..? ,
ಪಯಣ ಆರಂಭಿಸಿದ ಮೇಲೇನೆ
ನೋವು ನಲಿವಿನ ದರ್ಶನ,
ಅವಿರತ ಪರಿಶ್ರಮದ ನಂತರವೇ
ಬಾಳ ವೇದಿಕೆಯಲ್ಲಿ ಯಶಸ್ಸಿನ ನರ್ತನ..
-ಬುಕ್ಕಾಪಟ್ಟಣ ಮೋಹನ್
Monday, September 5, 2016
ಬಾಧ್ರಪದವು ಬಂದಿರಲು,
ಖುಷಿ ಎಲ್ಲೆಡೆ ತುಂಬಿರಲು;
ಆದಿವಂದಿತ ಬರುತಿಹನು,
ಸಂಭ್ರಮವ ತರುತಿಹನು;
ವರವ ನೀಡೊ ವರಪ್ರದಾಯಕ,
ಬುದ್ಧಿ ಕೊಡೊ ಸಿದ್ಧಿವಿನಾಯಕ;
ಬೆನಕ ಬೆನಕ ಬೆನಕ ಎನ್ನಲು,
ಮನದಲಿ ಹೊಸ ಪುಳಕ;
ಮೋದಕಪ್ರಿಯ ಮುದ್ದು ಗಣಪ,
ಗೌರಿಸುತ ಸುಂದರ ರೂಪ;
ರಾವಣದರ್ಪ ವಿನಾಶಕ,
ಗಣಗಳ ಅಧಿಪತಿ ಗಣನಾಯಕ;
ಲಂಬೋದರ ನೀ ತ್ರಿಜಗ ವಣ್ದಿತ,
ಕಾವ್ಯ ನಾಟ್ಯ ಶಾಸ್ತ್ರ ಪರಿಣಿತ;
ಬದುಕ ಮಾಡು ನೀ ಸುಲಲಿತ,
ಪೂರೈಸು ನಮ್ಮ ಮನದ ಇಷ್ಟಾರ್ಥ..
- ಬುಕ್ಕಾಪಟ್ಟಣ ಮೋಹನ್